Slide
Slide
Slide
previous arrow
next arrow

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ- ನಾಣ್ಯ ದೋಚಿದ ಕಳ್ಳರು

300x250 AD

ಅಂಕೋಲಾ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮುಂದಿನ ಬೀಗ ಮುರಿದು ಮನೆಯಲ್ಲಿದ್ದ ಬೆಳ್ಳಿ- ಬಂಗಾರವನ್ನು ದೋಚಿಕೊಂಡು ಹೋದ ಘಟನೆ ತಾಲೂಕಿನ ಮಾದನಗೇರಿ ಬಳಲೆಯಲ್ಲಿ ನಡೆದಿದೆ.
ಹರಿಶ್ಚಂದ್ರ ಭಂಡಾರಿಯವರು ಎರಡು ದಿನ ಮನೆಯಲ್ಲಿಲ್ಲದ ಸಮಯವನ್ನೆ ನೋಡಿಕೊಂಡು ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು, ಮನೆಯೊಳಗೆ ಹೊಕ್ಕಿ ಮನೆಯ ಬೆಡ್‌ರೂಮ್ ಕೋಣೆಗಳಲ್ಲಿದ್ದ ಗೋದ್ರೇಜ್ ಕಪಾಟುಗಳನ್ನು ಒಡೆದು ಹಣ, ಬಂಗಾರ ಸೇರಿದಂತೆ ಮೌಲ್ಯಯುತ ವಸ್ತುಗಳಿಗೆ ಹುಡುಕಾಡಿದ್ದಲ್ಲದೇ, ಅಡುಗೆ ಕೋಣೆಗೆ ತಾಗಿಕೊಂಡು ಇರುವ ಬೆಡ್‌ರೂಮ್ ಕೋಣೆಯಲ್ಲಿನ ಕಪಾಟ್‌ನ್ನು ಒಡೆದು ಅದರೊಳಗಿದ್ದ ಸುಮಾರು ಒಂದು ಜೊತೆ ಬೆಳ್ಳಿಯ ಗೆಜ್ಜೆ, ಬೆಳ್ಳಿಯ ಮಕ್ಕಳ ಡಾಬು, ಬೆಳ್ಳಿಯ ವಾಂಕ್, ಪಂಚಲೋಹದ ವಾಂಕ್, ಅಂದಾಜು 10 ಗ್ರಾಂ. ತೂಕದ ಕರಿಮಣಿ ಮಿಶ್ರಿತ ಬಂಗಾರದ ಒಂದು ತಾಳಿ ಸರವನ್ನು ಹಾಗೂ ಮನೆಯ ಹಾಲ್‌ನ ಶೋಕೇಸ್‌ದಲ್ಲಿ ಡಬ್ಬಿಯೊಂದರಲ್ಲಿ ಇಟ್ಟಿದ್ದ 6500 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಪ್ರವೀಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top